ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿರುವ ತುಮಕೂರು ಜಿಲ್ಲೆಯು ಇತಿಹಾಸ ಪ್ರಸಿದ್ಧವಾದದ್ದು. ಈ ಜಿಲ್ಲೆಯು ಕೆಲವು ಪುಣ್ಯಕ್ಷೇತ್ರಗಳಾದ ಶ್ರೀಸಿದ್ದಗಂಗಾಮಠ, ಗೂಳೂರಿನ ಶ್ರೀ ಗಣೇಶ, ಕೈದಾಳದ ಶ್ರೀ ಚೆನ್ನಕೇಶವ ದೇವಾಲಯ, ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿದೇವಸ್ಥಾನ, ಚಿಕ್ಕಸಾರಂಗಿಯ ಶ್ರೀ ತೋಪಿನರಂಗನಾಥಸ್ವಾಮಿ ದೇವಾಲಯ, ಗವಿರಂಗನಾಥಸ್ವಾಮಿ ದೇವಾಲಯ, ಗೊರವನಹಳ್ಳಿ ಶ್ರೀಲಕ್ಷ್ಮಿ ದೇವಸ್ಥಾನ ಮುಂತಾದವುಗಳು ಸಹಸ್ರಾರು ಭಕ್ತಾದಿಗಳಿಗೆ ಪವಿತ್ರ-ಪುಣ್ಯ ಕ್ಷೇತ್ರಗಳೆಂದು ಜನಪ್ರಿಯವಾಗಿದೆ.
ತುಮಕೂರುಜಿಲ್ಲೆ, ತುಮಕೂರು ತಾಲ್ಲೂಕು, ಗೂಳೂರು ಹೋಬ್ಳಿಗೆ ಶ್ರೀಕ್ಷೇತ್ರಹೆತ್ತೇನಹಳ್ಳಿ ಗ್ರಾಮವು ಸೇರಿದೆ. ಇದು ತುಮಕೂರು ನಗರದಿಂದ ಸುಮಾರು 9 ಕಿಲೋ ಮೀಟರ್ ದೂರದಲ್ಲಿದೆ. ಶ್ರೀಕ್ಷೇತ್ರಹೆತ್ತೇನಹಳ್ಳಿ ಗ್ರಾಮದ ಅಧಿದೇವತೆಯಾದ ಶ್ರೀಆದಿ ಶಕ್ತಿಹೆತ್ತೇನಹಳ್ಳಿ ಅಮ್ಮನವರ ಜಾತ್ರಾಮಹೋತ್ಸವವು ಸುಮಾರು ಎಂಟು ದಿವಸಗಳ ಕಾಲ ಅತ್ಯಂತ ವಿಜೃಂಬಣೆಯಿಂದ ಜರುಗುತ್ತದೆ.
ಗಜಮುಖನ ಹಡೆದವಳ ಶಂಕರನ ಮಡದೀಯ ಮಹಿಮೆಯ ಅರುಹುವೆ ಕೇಳೀರಿ ಮಹಿಮೆಯ ಅರುಹುವೆ ಕೇಳಿ ಬಾಂಧವರೆಲ್ಲ ಬಹು ತರದ ಬಾಧೆಯ ಕಳೆಯುವಳು....
ಸಗುಣೇ ಶಂಕರಿ ಹೇ ಆದಿಶಕ್ತಿ ನಿರ್ಗುಣೆ ನಿರಾಮಯೆ ಮೂಲಶಕ್ತಿ ಮಧುಕೈಟಭರ ಮರ್ದಿಸಿದವಳೆ ಮದವನಡಗಿಸಿ ಗರ್ಜಿಸಿದವಳೇ ||೧|| ಮೂರು ಮೂರ್ತಿಗಳ ಮಾತೆಯು...
ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ತುಮಕೂರು ಜಿಲ್ಲೆಯು ಇತಿಹಾಸ ಪ್ರಸಿದ್ಧವಾಗಿದ್ದು ಪ್ರೇಕ್ಷಣೀಯ ಸ್ಥಳಗಳ ತವರೂರಾಗಿದೆ.
ಶ್ರೀ ಹೆತ್ತೆನಹಳ್ಳಿ ಅಮ್ಮನವರ ದೇವಸ್ಥಾನದ ಪ್ರದೇಶ ವಿವರಗಳ ಸಮಗ್ರ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...